Thursday, June 4, 2015

Make Money With Simple Part Time Jobs At Home






Still not earning from Internet ?.Don’t worry! We show you the way to earn Real Internet Money. You can Earn Rs.100/- or $2 for each and every successful Assignment. No Earning Limitation. Payment Guaranteed.
For more details visit http://www.online-parttime-jobs.com/register.php?ruser=vinodachalkar

Saturday, May 9, 2015







ಜನ್- ಧನ್ ಯೋಜನೆಯಿಂದ ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಇಂದು ಮೂರು ಬೃಹತ್ ಯೋಜನೆಗಳನ್ನು ಆರಂಭಿಸಿದ್ದು ಮತ್ತೊಮ್ಮೆ ತಮ್ಮ ಅಚ್ಛೇದಿನ್​ ಕಲ್ಪನೆಯನ್ನು ಸಾಕಾರ ಗಳಿಸಲು ಮುಂದಾಗಿದೆ.
ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಇದು ಮೋದಿ ಅವರ ದೂರ ದೃಷ್ಟಿಯ ಫಲವಾಗಿದ್ದು  ಈಗಾಗಲೇ ಯಾವುದೇ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರು ಆ ಬ್ಯಾಂಕಿಗೆ ತೆರಳಿ ವಾರ್ಷಿಕ 12 ರೂ. ಪಾವತಿಸಿದರೆ ಒಂದೊಮ್ಮೆ ಆ ವ್ಯಕ್ತಿ ಅಪಘಾತದಿಂದ ಮರಣ ಹೊಂದಿದರೆ 2 ಲಕ್ಷ, ಭಾಗಶಃ, ಶಾಶ್ವತ ಅಂಗವೈಕಲ್ಯ ಉಂಟಾದವರಿಗೆ 1 ಲಕ್ಷ ರೂ. ಅಪಘಾತ ವಿಮೆಯನ್ನು ಸಂಬಂಧಿಸಿದ ನಾಮನಿರ್ದೇಶಿತರಿಗೆ ನೀಡಲಾಗುವುದು. 18 ರಿಂದ 70 ವರ್ಷ ವಯೋಮಾನದವರು ಈ ವಿಮೆ ಹೊಂದಬಹುದಾಗಿದ್ದು ಇದರಿಂದ ಬಡವರ್ಗದ ಜನರಿಗೆ ಅತ್ಯಂತ ಅನುಕೂಲವಾಗಲಿದೆ.
ಪ್ರಧಾನಮಂತ್ರಿ ಜೀವನ್​ ಜ್ಯೋತಿ ಭೀಮಾ ಯೋಜನೆ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರ ತಂದಿರುವ ಈ ಯೋಜನೆಯಡಿಯಲ್ಲಿ 18 – 50 ವರ್ಷದೊಳಗಿನವರು ಈ ವಿಮೆ ಹೊಂದಲು ಅರ್ಹರಾಗಿರುತ್ತಾರೆ. ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳು ಇದನ್ನು ಜಾರಿಗೊಳಿಸಲಿದ್ದು  ವಾರ್ಷಿಕ 330 ರೂಪಾಯಿ ಪಾವತಿಸಿದ ವಿಮಾದಾರರು ಯಾವುದೇ ರೀತಿಯಲ್ಲಿ ಮೃತಪಟ್ಟರೂ 2 ಲಕ್ಷ ರೂಪಾಯಿ ವಿಮಾ ಹಣ ದೊರೆಯುತ್ತದೆ. ಇದರಿಂದ ಅವರ ಕುತುಮ್ಬಕ್ಕೊಂದು ಭದ್ರತೆ ಕಲ್ಪಿಸಿದಂತಾಗುತ್ತದೆ.
ಅಟಲ್​ ಪೆನ್ಶನ್​ ಯೋಜನೆಯಡಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಪೆನ್ಶನ್​ ಕಲ್ಪಿಸಲು  ಮುಂದಾಗಿರುವ ಕೇಂದ್ರ ಸರ್ಕಾರ ಈ ವರ್ಗದ ಜನ ತಮ್ಮ ವೃದ್ದಾಪ್ಯದಲ್ಲಿ ಎದುರಾಗುವ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದಾಗಿದೆ. ಈ ಯೋಜನೆಯ ಪ್ರಕಾರ  60 ವರ್ಷದ ನಂತರ 1 ಸಾವಿರದಿಂದ 5 ಸಾವಿರದವರಗೆ ಪ್ರತೀ ತಿಂಗಳು ಪಿಂಚಣಿ ಬರುವಂತೆ ವ್ಯವಸ್ಥೆ ಮಾಡಿದ್ದು, ಆ ವ್ಯಕ್ತಿಯು ತುಂಬಿದ ಪ್ರಿಮಿಯಂನ್ನು ಆಧರಿಸಿ, ಪಿಂಚಣಿ ನಿಗದಿಯಾಗಲಿದೆ.
ಒಟ್ಟಾರೆ ಕೇವಲ ಪ್ರಚಾರಕ್ಕೋಸ್ಕರ ಯೋಜನೆಯನ್ನು ಘೋಷಿಸುವುದನ್ನು ಬಿಟ್ಟು ಭಾರತದ ಪ್ರತಿಯೊಬ್ಬ ಪ್ರಜೆಯೂ ಸರ್ಕಾರದ ಸೌಲಭ್ಯವನ್ನು ಪಡೆಯುವಂತಾಗಬೇಕು ಎಂಬ ಆಶಯ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾಗಿಯೂ ‘ಅಚ್ಚೇ ದೀನ್’ ಕನಸನ್ನು ನನಸಾಗಿಸಲು ಈ ಯೋಜನೆಗಳು ಸಾಕಾರವಾಗಬಹುದು ಎಂಬ ಮಾತುಗಳುಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.